ಬಂದಳೋ ಬಂದಳು ಮತ್ತೊಬ್ಬ ಪಡುಕೋಣೆ


ಕನ್ನಡಕ್ಕೆ ಮತ್ತೊಬ್ಬಳು ಪಡುಕೋಣೆ ಬಂದಿದ್ದಾರೆ. ಹಾಗಂತ ಈಕೆ ಬಾಲಿವುಡ್ನಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಅವರ ತಂಗಿಯೂ ಅಲ್ಲ ಸಂಬಂಧಿಕರೂ ಅಲ್ಲ. ಬದಲಿಗೆ ಆಕೆಯ ಊರಿನವಳು. ಹೆಸರು ಸಂಚಿತಾ. ನಿರ್ದೇಶಕ ಯೋಗೀಶ್ ಹುಣಸೂರು ಕಟ್ಟಿಕೊಡಲಿರುವ ರಾವಣ ಚಿತ್ರದಲ್ಲಿ ಯೋಗೀಶ್ಗೆ ನಾಯಕಿಯಾಗಿದ್ದಾರೆ.

ಈಕೆ ಈಗಾಗಲೇ ತಮಿಳಿನ ಮುತ್ತಳಗಿ ಎಂಬ ಚಿತ್ರದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡಾಗಿದೆ. ಉದಯ್ ಎಂಬಾತ ಅದರ ನಾಯಕ. ಆದಾದ ಬಳಿಕ ಸುಮಾರು ಒಂದು ವರ್ಷ ಅವಕಾಶಕ್ಕಾಗಿ ಕಾದು ಕುಳಿತ ಸಂಚಿತಾಗೆ ಈಗ ರಾವಣ ಸಿಕ್ಕಿದ್ದಾನೆ.

ಇವತ್ತಿನ ದಿನಗಳಲ್ಲಿ ಚಿತ್ರರಂಗ ಎಂದ ಮೇಲೆ ಅಲ್ಲಿ ಎಕ್ಸ್ಪೋಸಿಂಗ್ ದೃಶ್ಯಗಳಿರುವುದು ಸಾಮಾನ್ಯ. ಬರೇ ಗೌರಮ್ಮನ ಪಾತ್ರವೇ ಯಾವತ್ತೂ ಸಿಗೋದಿಲ್ಲ. ಅಗತ್ಯ ಬಿದ್ದಾಗ ಬಿಚ್ಚಮ್ಮನ ಪಾತ್ರಕ್ಕೂ ರೆಡಿನಾ ಎಂದು ಕೇಳಿದರೆ, ಕನ್ನಡದ ಬಹುತೇಕ ಹುಡುಗಿಯರು ಆ ತರಹದ ಪಾತ್ರ ಒಪ್ಪೋದಿಲ್ಲ. ಹಾಗಂತ ನಾನೇನೂ ಎಕ್ಸ್ಪೋಸಿಂಗ್ ಒಪ್ಪಲ್ಲ ಅಂತಲ್ಲ. ಪಾತ್ರ ಯಾವ ತರಹ ಬೇಡುತ್ತೆ ಅನ್ನೋದರ ಮೇಲೆ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾರೆ ಇವರು. ಏನೇ ಪಾತ್ರ ಮಾಡಿದರೂ ಅದು ಅಶ್ಲೀಲವಾಗಿ ಕಾಣಬಾರದೆಂಬುದು ಸಂಚಿತಾ ಸಿದ್ದಾಂತ.

ಮೊಗ್ಗಿನ ಮನಸು ಚಿತ್ರದ ನಿರ್ದೇಶಕ ಶಶಾಂಕ್ ಅವರನ್ನು ಭೇಟಿಯಾಗಿ ಅವಕಾಶ ಕೇಳಿದ್ದಾರಂತೆ. ಮುಂದಿನ ಚಿತ್ರದಲ್ಲಿ ಅವಕಾಶ ನೀಡುವ ಭರವಸೆಯನ್ನು ಶಶಾಂಕ್ ನೀಡಿದ್ದಾರಂತೆ. ಈಕೆಗೆ ದರ್ಶನ್ ಜೊತೆ ನಾಯಕಿಯಾಗಿ ನಟಿಸಬೇಕೆಂಬ ಆಸೆ ಇದೆಯಂತೆ.

ಓಕೆ ಗುಡ್ಲಕ್

No comments: